ಶುಕ್ರವಾರ, ಮೇ 13, 2016

ಸಮನ್ವಯತೆಯೇ ಸಂಸ್ಕೃತಿಯ ಅಂತರ್ಯ

ಏಪ್ರಿಲ್ 16-22, 2016 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ |
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃ ||
ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ |
ಸೋಯಂ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ಹರಿಃ ||
ಹನ್ನೆರಡನೇ ಶತಮಾನದ ಹೊಯ್ಸಳ ಶಾಸನವೊಂದರಲ್ಲಿ ಉಲ್ಲೇಖಿತವಾಗಿರುವ ಪ್ರಾರ್ಥನಾಶ್ಲೋಕವಿದು. “ಶೈವರು ಶಿವನೆಂದು ಯಾರನ್ನು ಉಪಾಸಿಸುವರೋ, ವೇದಾಂತಿಗಳು ಬ್ರಹ್ಮವೆಂದು ಯಾರನ್ನು ನಂಬುವರೋ, ವೈಚಾರಿಕಶ್ರೇಷ್ಠರಾದ ನೈಯಾಯಿಕರು ಯಾರನ್ನು ಕರ್ತೃವೆನ್ನುವರೋ, ಬೌದ್ಧರು ಯಾರನ್ನು ಬುದ್ಧನೆಂದು ಆರಾಧಿಸುವರೋ, ಜೈನಶಾಸನದ ಅನುಯಾಯಿಗಳು ಅರ್ಹತ್ ಎಂದು ನಿತ್ಯವೂ ಯಾರನ್ನು ನಂಬುವರೋ, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸನೆಗೈಯುವರೋ ಅಂತಹ ಮೂರು ಲೋಕದ ಒಡೆಯನಾಗಿರುವ ಶ್ರೀಹರಿಯು ನಿಮ್ಮ ಇಷ್ಟಫಲಗಳನ್ನು ಕರುಣಿಸಲಿ” ಎಂಬ ಭಾವಾರ್ಥದ ಈ ಶ್ಲೋಕ ಇಡೀ ಭಾರತೀಯ ಸಂಸ್ಕೃತಿಯ ಸಮನ್ವಯ ಗುಣಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಎಲ್ಲರನ್ನೂ ಎಲ್ಲವನ್ನೂ ಗೌರವದಿಂದ, ಸಂತುಲಿತ ಮನಸ್ಸಿನಿಂದ ಕಂಡ ಮೇಲ್ಮೆ ಭಾರತೀಯ ಸಂಸ್ಕೃತಿಯದ್ದು. ಅದು ಅಧ್ಯಾತ್ಮದ ತೊಟ್ಟಿಲಾಗಿದ್ದಂತೆಯೇ ಎಲ್ಲ ಬಗೆಯ ನಂಬಿಕೆ-ನಡವಳಿಕೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಜೀವನಶೈಲಿಗಳ ತಾಯಿಯೂ ಆಗಿ ಸಾವಿರಾರು ವರ್ಷಗಳಿಂದ ಸಾಗಿ ಬಂದಿದೆ. ಅದು ಹತ್ತು ಹಲವು ಮತ-ಪಂಥಗಳ ಪ್ರಯೋಗಶಾಲೆ. ಈ ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ ಅಥವಾ ಒಬ್ಬ ಪ್ರವಾದಿಯ ಕೊಡುಗೆ ಅಲ್ಲ. ಯಾವುದೋ ಒಂದು ವರ್ಗದ ಸೊತ್ತೂ ಅಲ್ಲ. ಅದಕ್ಕೇ ವೈವಿಧ್ಯತೆ ನಮ್ಮ ಸಂಸ್ಕøತಿಯ ಪ್ರಾಥಮಿಕ ಲಕ್ಷಣ. ವೈವಿಧ್ಯತೆಯನ್ನೂ ಸಮನ್ವಯತೆಯನ್ನೂ ಏಕಕಾಲಕ್ಕೆ ಪ್ರದರ್ಶಿಸಬಲ್ಲ ತನ್ನ ಸಾಮಥ್ರ್ಯದಿಂದಾಗಿಯೇ ಭಾರತೀಯ ಪರಂಪರೆಗೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಲಭಿಸಿರುವುದು.

ಜನರು ಎಷ್ಟೇ ಮತಗಳನ್ನು ಹೊಂದಿರಲಿ, ಎಷ್ಟೇ ದೇವರುಗಳನ್ನು ಪೂಜಿಸಲಿ ಒಟ್ಟಾರೆ ಸಮಾಜ ಅದರ ಬಗ್ಗೆ ಅಸಹಿಷ್ಣುವಾಗಿದ್ದಿಲ್ಲ. ಮೂಲದಲ್ಲಿ ಎಲ್ಲವೂ ಒಂದೇ ಎಂಬ ಭಾವವೇ ಇದರ ಹಿಂದಿನ ರಹಸ್ಯ. ‘ಆಕಾಶಾತ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ| ಸರ್ವದೇವ ಸಮಸ್ಕಾರಃ ಕೇಶವಂ ಪ್ರತಿಗಚ್ಛತಿ|’ ಎಂಬುದು ಹಿರಿಯರು ಅರಿತಿದ್ದ ಸತ್ಯ. ಆಕಾಶದಿಂದ ಬೀಳುವ ನೀರು ಹೇಗೆ ಸಮುದ್ರವನ್ನು ಸೇರುತ್ತದೆಯೋ ಹಾಗೆಯೇ ಯಾವ ದೇವರಿಗೆ ನಮಸ್ಕರಿಸಿದರೂ ಅದು ಭಗವಂತನಿಗೆ ತಲುಪುತ್ತದೆ ಎಂಬ ಉದಾರ ಮನಸ್ಥಿತಿಯೇ ನಮ್ಮ ಸಂಸ್ಕøತಿಯ ಅಂತರ್ಯ.

ಈ ಸಮನ್ವಯದ ಹತ್ತು ಹಲವು ಉದಾಹರಣೆಗಳು ಪುರಾಣೇತಿಹಾಸ ಕಾಲದಿಂದಲೂ ನಮ್ಮ ನೆಲದಲ್ಲಿ ಹೇರಳವಾಗಿ ಸಿಗುತ್ತವೆ. ಕರ್ನಾಟಕವನ್ನಾಳಿದ ರಾಷ್ಟ್ರಕೂಟರು, ಹೊಯ್ಸಳರು ಜೈನ-ವೈಷ್ಣವ ಸಮನ್ವಯವನ್ನು ಸಾರಿದವರಾದರೆ, ಚಾಲುಕ್ಯರು ಮತ್ತು ವಿಜಯನಗರದ ಅರಸರು ಶೈವ-ವೈಷ್ಣವ ತತ್ವವನ್ನು ಜತೆಯಾಗಿ ಗೌರವಿಸಿದವರು. ‘ಅಮುಕ್ತಮಾಲ್ಯದ’ವನ್ನು ರಚಿಸಿದ ಪ್ರಸಿದ್ಧ ರಾಜ ಕೃಷ್ಣದೇವರಾಯ ಶ್ರೀವೈಷ್ಣವ ಪಂಥದ ತಾತಾಚಾರ್ಯರನ್ನೂ, ಮಾಧ್ವ ಪಂಥದ ವ್ಯಾಸರಾಯರನ್ನೂ ಏಕಕಾಲಕ್ಕೆ ಗುರುಗಳಾಗಿ ಪಡೆದವನು. ವೈಯುಕ್ತಿಕವಾಗಿ ಶ್ರೀನಿವಾಸನ ಭಕ್ತನಾಗಿದ್ದ ಕೃಷ್ಣದೇವರಾಯ ಹಂಪಿಯ ವಿರೂಪಾಕ್ಷನನಿಗೂ ತಲೆಬಾಗಿದವನು; ವಿಜಯವಿಠ್ಠಲ ದೇವಾಲಯವನ್ನೂ ಕಟ್ಟಿಸಿದವನು.

ಬುದ್ಧನನ್ನೂ ಆದಿ ತೀರ್ಥಂಕರನನ್ನೂ ವಿಷ್ಣುವಿನ ಅವತಾರವೆಂದೇ ಪೂಜಿಸುವ ನೆಲವಿದು. ಹಿಂದೂ-ಮುಸಲ್ಮಾನರಿಬ್ಬರೂ ಸಂದರ್ಶಿಸುವ ನೂರಾರು ದೇವಸ್ಥಾನಗಳು, ದರ್ಗಾಗಳು ಭಾರತದಾದ್ಯಂತ ಅಲ್ಲಲ್ಲಿ ಸಿಗುತ್ತವೆ. ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿಗಳಂತಹ ಹಬ್ಬಗಳಲ್ಲಿ ಮುಸಲ್ಮಾನರೂ, ಮೊಹರಂನಂತಹ ಹಬ್ಬಗಳಲ್ಲಿ ಹಿಂದೂಗಳೂ ಭಾಗವಹಿಸುವುದು ಹೊಸದೇನಲ್ಲ. ಬೆಂಗಳೂರಿನ ಪ್ರಸಿದ್ಧ ಕರಗ ಮಸ್ತಾನ್ ಸಾಬಿ ದರ್ಗಾಕ್ಕೂ ಹೋಗಿ ಪೂಜೆ ಸಲ್ಲಿಸಿ ಬರುವ ಕ್ರಮವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮೂರು ಮತಗಳ ಸಂಗಮಸ್ಥಾನ. ಅಲ್ಲಿನ ಆಡಳಿತದ ಹೊಣೆ ಜೈನರದ್ದು; ಪೂಜಿಸಲ್ಪಡುವ ದೇವರು ಮಂಜುನಾಥ, ಅಂದರೆ ಶಿವ; ಪೂಜೆಯ ಜವಾಬ್ದಾರಿ ಹೊಂದಿರುವವರು ವೈಷ್ಣವರು. ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯದ ದೇವಾಲಯ ಶಿಖರದಲ್ಲಿ ಮುಸ್ಲಿಂ ವಾಸ್ತುಶಿಲ್ಪವಿದೆ.

ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಂಗೀತ-ಸಾಹಿತ್ಯ ಕ್ಷೇತ್ರದಲ್ಲಂತೂ ಈ ಸಮನ್ವಯತೆ ಹೇರಳವಾಗಿದೆ.  ನಮ್ಮ ಹಿಂದೂಸ್ತಾನಿ ಸಂಗೀತದ ಶ್ರೀಮಂತಿಕೆಯ ಹಿಂದೆ ಮುಸ್ಲಿಂ ಕಲಾವಿದರ ಕೊಡುಗೆ ಅಪಾರ. ದಾಸಸಾಹಿತ್ಯವನ್ನು ಜನಪ್ರಿಯಗೊಳಿಸಿದವರಲ್ಲಿ ಫಯಾಜ್ ಖಾನ್, ಹುಸೇನ್ ಸಾಬರಂಥ ಪ್ರಮುಖರಿದ್ದಾರೆ. ಅನೇಕ ಕೀರ್ತನೆಗಳನ್ನು ರಚಿಸಿರುವ ಬಡೇ ಸಾಬ್ ಅವರ ಅಂಕಿತನಾಮ ‘ಶ್ರೀರಾಮ’. ಪರ್ವೀನಾ ಸುಲ್ತಾನಾ, ಅಲ್ಲಾದಿಯಾ ಖಾನ್ ಅವರ ಕೊಡುಗೆಗಳನ್ನಾಗಲೀ, ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಅವರ ಕೊಡುಗೆಗಳನ್ನಾಗಲೀ ನಾವು ಹೇಗೆ ಮರೆತೇವು? ಗೋವಿಂದ ಭಟ್ಟರನ್ನು ಗುರುಗಳನ್ನಾಗಿ ಪಡೆದ ಸಂತ ಶಿಶುನಾಳ ಷರೀಫರನ್ನಾಗಲೀ, ಸಮನ್ವಯತೆಯೇ ಮೂರ್ತಿವೆತ್ತ ಕಬೀರ, ಸಮರ್ಥ ರಾಮದಾಸರು, ಕನಕದಾಸರನ್ನಾಗಲೀ ನಾವು ಹೇಗೆ ಮರೆತೇವು?

ಸಂಸ್ಕೃತಿಯೊಳಗಿನ ಸಮನ್ವಯತೆಯ ಬೀಜ ವೇದಗಳ ಕಾಲದಿಂದಲೂ ಜೀವಂತವಾಗಿದೆ. ಋಗ್ವೇದದ ಒಂದು ಮಂತ್ರ ಈ ಮಾತನ್ನು ಪುಷ್ಟೀಕರಿಸುತ್ತದೆ:
ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ |
ಮಧ್ಯಮಾಸೋ ಮಹಸಾ ವಿವಾವೃಧುಃ ||
ಸುಜಾತಾಸೋ ಜನುಷಾ ಪೃಶ್ನಿಮಾತರೋ |
ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ ||

‘ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ.  ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ’ ಎಂಬ ಈ ಮಾತು ಎಲ್ಲಾ ಕಾಲಕ್ಕೂ ಸಮನ್ವಯ ತತ್ವವನ್ನು ಎತ್ತಿಹಿಡಿಯಬಲ್ಲ ಸಾಮರ್ಥ್ಯವುಳ್ಳದ್ದು.

ಯಜುರ್ವೇದದ ಇನ್ನೊಂದು ಮಂತ್ರವೂ ಇದೇ ಭಾವವನ್ನು ಸ್ಫುರಿಸುತ್ತದೆ:
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವಭೂತೇಶು ಚಾತ್ಮಾನಂ ತತೋ ನ ವಿ ಚಿಕಿತ್ಸತಿ ||
‘ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ’.
ವೇದಗಳ ಈ ಬಗೆಯ ಆಶಯ ನಿಜವಾಗಿಯೂ ಸಮಾಜದ ಬೇರುಗಳಿಗೆ ಇಳಿದರೆ ಸಮಾಜದಲ್ಲಿ ಅಸಮಾನತೆಯಾಗಲೀ ಅಸಹಿಷ್ಣುತೆಯಾಗಲೀ ಮೇಲುಕೀಳು ಭಾವವವಾಗಲೀ ನೆಲೆಗೊಳ್ಳುವುದಕ್ಕೆ ಅವಕಾಶವೇ ಇಲ್ಲ. ಇದುವೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆ.

“ಸಂಸ್ಕೃತಿಗಳು ಏಕರೂಪಿ ರಚನೆಗಳಲ್ಲ. ಅವು ಪರಸ್ಪರ ಕುಡುಕೊಳುವಿಕೆಗಳಿಂದ ನಿರಂತರವಾಗಿ ಬೆಳೆಯುತ್ತವೆ. ಆದ್ದರಿಂದ ಸಂಸ್ಕೃತಿಗಳಲ್ಲಿ ಬಹುಮುಖತೆ ಸಾಮಾನ್ಯವಾಗಿರುತ್ತದೆ. ಭಾಷೆ, ಧರ್ಮ, ಆಚರಣೆ, ಸಂಪ್ರದಾಯ, ಭಿನ್ನ ಅನುಸಂಧಾನ, ಕಲೆ, ಆರ್ಥಿಕತೆ, ಲೋಕಗ್ರಹಿಕೆ, ನೋಟಕ್ರಮ ಇವೇ ಮೊದಲಾದವುಗಳ ಸಂಶ್ಲೇಷಿತ ರೂಪವೇ ಸಂಸ್ಕೃತಿ” ಎಂಬ ಮಾತು ಉಲ್ಲೇಖನೀಯ. ಬಹುಮುಖತೆಯೇ ಭಾರತೀಯ ಸಂಸ್ಕೃತಿಯ ಜೀವಾಳ. ವಿಭಿನ್ನ ಸಾಂಸ್ಕೃತಿಕ ನೆಲೆಗಳ ಈ ದೇಶದಲ್ಲಿ ಸಂಸ್ಕೃತಿ, ಪ್ರತಿಸಂಸ್ಕೃತಿ, ಉಪಸಂಸ್ಕೃತಿಗಳೆಲ್ಲ ಒಂದೇ ವಾಹಿನಿಗೆ ಸೇರಿಹೋಗಿವೆ. ಹಾಗಂತ ಇವು ಯಾವುದೋ ಒಂದು ಏಕರೂಪತೆಯತ್ತ ತುಡಿಯುವುದಿಲ್ಲ. ಏಕರೂಪತೆಯ ಬಯಕೆ ವೈವಿಧ್ಯತೆಗೆ ವಿನಾಶಕಾರಿ. ನಮ್ಮ ಕನ್ನಡ ಸಾಹಿತ್ಯವೂ ಏಕಸ್ತರೀಯ ನೆಲೆಯಿಂದ ಬಹಿಸ್ತರೀಯ ನೆಲೆಗಳ ಕಡೆಗೇ ಸಾಗಿಬಂದಿದೆ.

“ವಾಸ್ತವವಾಗಿ ಭಾರತೀಯ ಸಂಸ್ಕøತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ ಸಂಸ್ಕೃತಿ, ತಮಿಳು ಸಂಸ್ಕೃತಿ, ತೆಲುಗು ಸಂಸ್ಕೃತಿ, ಮಹಾರಾಷ್ಟ್ರ ಸಂಸ್ಕೃತಿ ಇವೇ ಮೊದಲಾದ ಸದೃಶವೂ ಭಿನ್ನವೂ ಆದ ಸಂಸ್ಕೃತಿಗಳ ಸಮಷ್ಟಿ ರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ. ಎಂದರೆ, ಭಾರತೀಯ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಒಂದೊಂದು ಪ್ರಾಂತಕ್ಕೂ ವಿಶಿಷ್ಟ ಜೀವನ ವಿಧಾನವಿದೆ. ಆ ವಿಶಿಷ್ಟ ಸಂಸ್ಕೃತಿಯನ್ನು ಗಮನಿಸುವುದು, ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆಯೇ” ಎಂಬ ಡಾ. ಎಂ. ಚಿದಾನಂದಮೂರ್ತಿಯವರ ಮಾತು ಸಂಸ್ಕೃತಿ ಹಾಗೂ ಸಮನ್ವಯತೆಗಳ ಅಂತಃಸತ್ವವನ್ನು ತೆರೆದಿಡುತ್ತದೆ.

ಈಚಿನ ದಿನಗಳಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚುತ್ತಿರುವುದನ್ನು ನೋಡಿದರೆ ಈ ಬೆಳವಣಿಗೆಗಳ ಹಿಂದೆ ಇರುವವರ್ಯಾರೂ ನಮ್ಮ ಸಂಸ್ಕೃತಿಯ ನಿಜವಾದ ಸಾರವನ್ನು ಅರ್ಥ ಮಾಡಿಕೊಂಡಿಲ್ಲವೆಂದೇ ಅನಿಸುತ್ತದೆ. ವೈಚಾರಿಕ ಸಂಘರ್ಷಗಳು ಒಳ್ಳೆಯದು, ಆದರೆ ಅದು ವ್ಯಕ್ತಿಗತವಾದಾಗ ಇಡೀ ಸಮಾಜದ ಆರೋಗ್ಯ ಕೆಡುತ್ತದೆ, ಹಿಂಸೆ ತಾಂಡವವಾಡುತ್ತದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೇ ವ್ಯಾಪಿಸಿಕೊಂಡಿರುವ ಒಂದು ಸಾಂಕ್ರಾಮಿಕ ರೋಗ. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ - ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದಲೂ ಬರಲಿ - ಎನ್ನುವ ಋಗ್ವೇದವನ್ನು ಕೊಟ್ಟ ದೇಶಕ್ಕೆ ಜಗತ್ತಿಗೆ ಸಾಮರಸ್ಯದ ಪಾಠ ಹೇಳುವ ಜವಾಬ್ದಾರಿ ಇದೆ ಎಂಬುದನ್ನು ನಾವು ಮರೆಯಬಾರದು.

Job creation in Karnataka: IT has Lion's Share


Karnataka, the country’s eighth largest state in terms of area and ninth largest state in terms of population has been considered one of the most progressive industrialized states of the country. The State has an illustrious history of having successfully introduced several industrial and technological initiatives and has acquired a tag of being ‘the most technology-savvy’ state in India.

Karnataka has made rapid and spectacular strides in the new economy. Research and developments in Information technology, Biotechnology, and many other fields have enhanced the state’s achievements at the national and global levels. Karnataka accounts for more than one third of electronics and computer software exports from the country.

The spectacular IT growth story of India is led by Karnataka, thanks to the availability of highly skilled professionals, dynamic entrepreneurs, a vibrant eco-system, and industry-friendly policies of the State. In other words, Karnataka’s vast and diversified resource base has emerged as a reputed investment destination for investment worldwide. Consequently Karnataka is contributing to over 30% of the IT exports of the country.

Karnataka tops in IT jobs
The recent rankings by the Assocham, showing Karnataka’s position in the country’s job market has been undoubtedly a new feather on the state’s cap. Karnataka has been ranked as country’s top job creator with over 24 per cent share during the fourth quarter of the financial year 2015-16. Maharashtra (23%) and Tamil Nadu (10.5%) have got the next consecutive places.

According to the report, IT sector created about 57% of about 9 lakh job openings recorded between January and March, 2016, followed by services (19%) and manufacturing (11%), which is a clear indication of the share of the IT industry in the job market. Apart from this, within Karnataka, ITES accounted for over 65% share in job openings across the state followed by services (16%), manufacturing (8%).

Karnataka had recorded 2.16 lakh job openings in the first quarter of the last fiscal followed by Maharashtra, Tamil Nadu, Andhra Pradesh and Telangana. Sector-wise, Karnataka leads in terms of job openings in ITES sector with 28% share in over five lakh jobs created by the sector.

IT-friendly state
As mentioned earlier, the secret of Karnataka’s rapid growth in IT sector lies in its congenial atmosphere, supported by its IT-friendly policies. The government has been keen on retaining Bengaluru’s title as the Silicon Valley of India, trying to take the fruits of its IT prosperity to the various parts of the State.

'Karnataka i-4' policy (IT, ITES, Innovation and Incentives Policy) announced by the government last year, is one such novel initiative which was aimed at giving a thrust to the growth of the IT sector in the tier-two and tier-three cities across the state. The policy has empowered the Dept. of IT, BT and S&T to act as a Single Window Agency for clearance of IT, IT-enabled services, startups, animation, gaming, computer graphics, telecom, BPO, KPO, and other knowledge-based industries. The policy has features such as employment linked incentivisation of land allotment outside Bengaluru, stamp duty exemption of 75% in Mysore and Mangalore, exemption of such industries from the applicability of Karnataka industrial employment rules, inclusion of such industries in the essential services and so on.

Startup Policy
Karnataka has emerged the first Indian state to launch a startup policy of its own, which has further boosted the prosperity of IT industry. The objective of the policy is to create a world class startup hub, in order to stimulate growth of 20,000 technology startups and to create 6,000 product startups in Karnataka alone. It is aimed to mobilize Rs. 2,000-crore funds and to facilitate generation of at least 25 innovative technology solutions with social impact. In order to support R &D, the government will support Technology Business Incubators (TBIs) in institutions of higher learning for a period of three years.

In addition to these policies, Karnataka has recently unveiled the idea of establishing India's first Information Technology Investment Region (ITIR) on the outskirts of Bengaluru, which will attract $20 billion investment and create millions of jobs in the future. When developed completely, the project is expected to overtake Silicon Valley of the US in revenue and size.

Support in the Budget
IT, BT and Science & Technology have got special provisions in the state’s new budget as a step towards implementing its i4 and startup policies. The government has announced setting up of 10 new incubators in post-graduate and professional institutions across the State under the New Age Incubation Network. The budget has proposed to support the setting-up of four technology business incubators in potential areas of Internet of Things, ESDM, etc. across the State. The budget also proposes incubators and common instrumentation facilities in Bengaluru and in the IT Parks of Shivamogga, Bagalakote and Kalaburagi by KEONICS and new IT Parks-incubator in Belagavi, Bidar and Vijayapura.

ಸೋಮವಾರ, ಮೇ 2, 2016

ಸಿದ್ಧವನವೆಂಬ ಪುಟ್ಟ ಭಾರತ

ಮೇ 1, 2016ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ.

‘ಶಾಲಾ ಕಾಲೇಜುಗಳಲ್ಲಿ ಪಾಠ ಕಲಿತ ಮೇಲೆ ಪರೀಕ್ಷೆ ಬರೆಯುತ್ತೇವೆ; ಬದುಕಿನಲ್ಲಿ ಪರೀಕ್ಷೆಗಳಾದ ಮೇಲೆ ಪಾಠ ಕಲಿಯುತ್ತೇವೆ...’ ಪ್ರಾರ್ಥನಾ ಸಭೆಯಿಂದ ಈಚೆ ಬಂದ ಮೇಲೂ ಆ ಮಾತು ಕಿವಿಯಲ್ಲಿ ಗುಂಯ್‍ಗುಡುತ್ತಿತ್ತು. ಇನ್ನೂ ಚುಮುಚುಮು ಮುಂಜಾವು. ಬೆಳಕು

ಸರಿಯಾಗಿ ಹರಿದಿರಲಿಲ್ಲ. ಸಿದ್ಧವನದ ಹಸುರು ಮರಗಿಡಗಳ ನಡುವೆ ತಂಗಾಳಿ ಸುಳಿದಾಡುತ್ತಿತ್ತು. ಬೋಗುಣಿಯಲ್ಲಿ ಹಬೆಯಾಡುತ್ತಿದ್ದ ಬಿಸಿಬಿಸಿ ಚಹಾ ನಿಧಾನಕ್ಕೆ ಗಂಟಲೊಳಕ್ಕೆ ಇಳಿಯುತ್ತಿತ್ತು. ಸಿದ್ಧವನದ ಬೆಳ್ಳಂಬೆಳಗಿನ ಚಹಾ ಎಂದರೆ ಹಾಗೆಯೇ; ಕೊಂಚ ಸಪ್ಪೆಯೇ ಎನಿಸಿದರೂ ಅಂತಹದೊಂದು ಪಾನೀಯ ಪ್ರಪಂಚದ ಇನ್ಯಾವ ಪಾಕಶಾಲೆಯಲ್ಲೂ ತಯಾರಾಗದು.

ಚಹಾ ಮುಗಿದರೂ ಪ್ರಾರ್ಥನಾ ಸಭೆಯಲ್ಲಿ ಕೇಳಿದ ಆ ವಾಕ್ಯ ಮನಸ್ಸಿನಿಂದ ಮಾಸಿರಲಿಲ್ಲ. ಹುಡುಗರೆಲ್ಲ ತಾವು ತೊಟ್ಟಿದ್ದ ಶ್ವೇತ ವಸ್ತ್ರಗಳನ್ನು ಬದಲಾಯಿಸಿ ಲಗುಬಗೆಯಿಂದ ಹಾರೆ ಗುದ್ದಲಿಗಳೊಂದಿಗೆ ತೋಟದಲ್ಲಿ ಹಾಜರಾದರು. ತರಕಾರಿ ಸಾಲುಗಳಿಂದ ಕಳೆಕೀಳುವ, ನೀರು ಹಾಯಿಸುವ, ತೆಂಗಿನ ಮರಗಳಿಗೆ ಹಟ್ಟಿಯ ಸ್ಲರಿ ಊಡುವ ಕೆಲಸಗಳು ಅವ್ಯಾಹತವಾಗಿದ್ದವು. ಎರಡು ಗಂಟೆಗಳ ನಿರಂತರ ಶ್ರಮದ ಬಳಿಕ ಹೊಟ್ಟೆ ಬಕಾಸುರನಂತೆ ಬಾಯ್ದೆರೆದು ಕಾದಿದ್ದರೆ ಭೋಜನಶಾಲೆಯಲ್ಲಿ ಮತ್ತೆ ಬಿಸಿಬಿಸಿ ಗಂಜಿ-ಚಟ್ನಿ ಸಿದ್ಧವಾಗಿ ಕಾಯುತ್ತಿದ್ದವು. ಅಂತಹದೊಂದು ಮೃಷ್ಟಾನ್ನ ಭೋಜನ ಕೂಡ ಸಿದ್ಧವನದಲ್ಲದೆ ಇನ್ಯಾವ ಪಂಚತಾರಾ ಹೊಟೇಲಲ್ಲೂ ದೊರೆಯದು. ಮನಸ್ಸು ಮಾತ್ರ ನಸುಕಿನ ‘ಪಾಠ-ಪರೀಕ್ಷೆ’ಗಳ ಪ್ರಮೇಯವನ್ನು ಇನ್ನಿಲ್ಲದೆ ನೆನೆಯುತ್ತಿತ್ತು.

ಇದೆಲ್ಲ ಆಗಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಆ ಪ್ರಮೇಯ ಮಾತ್ರ ಮನಸ್ಸಿನಲ್ಲಿ ನಿನ್ನೆ ಮೊನ್ನೆ ಕೇಳಿದಷ್ಟೇ ತಾಜಾ ಆಗಿ ಉಳಿದುಕೊಂಡಿದೆ. ಕಷ್ಟಗಳು ಎದುರಾದಾಗಲೆಲ್ಲ ಅದು ನೆನಪಾಗುತ್ತದೆ. ಮನಸ್ಸು ಗಟ್ಟಿಯಾಗುತ್ತದೆ. ವಿದ್ವಾನ್ ಮಹಾಬಲೇಶ್ವರ ಭಟ್ಟರ ಮಾತುಗಳೆಂದರೆ ಹಾಗೆಯೇ. ಚುಟುಕು, ಚುರುಕು. ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಒಂದು ವಾಕ್ಯ ಇಡೀ ದಿನಕ್ಕೆ ಸಾಕಾಗುವ ಶಕ್ತಿಮದ್ದು. ಸಾಮಾನ್ಯ ಭಾಷೆಯಲ್ಲಿ ಅವರ ಹುದ್ದೆಯ ಹೆಸರು ‘ವಾರ್ಡನ್’. ಆದರೆ ಉಜಿರೆಯ ಶ್ರೀ ಸಿದ್ಧವನ ಗುರುಕುಲ ನಮಗೆ ಹಾಸ್ಟೆಲೂ ಆಗಿರಲಿಲ್ಲವಾಗಿ ಅವರು ವಾರ್ಡನ್ ಕೂಡ ಆಗಿರಲಿಲ್ಲ. ಗುರುಕುಲವಾಗಿದ್ದರಿಂದ ಅವರು ನಮಗೆ ಅಕ್ಷರಶಃ ಗುರುವೂ, ಎಲ್ಲೆಲ್ಲಿಂದಲೋ ಬಂದ ಬಡಪಾಯಿ ಹುಡುಗರಿಗೆ ಗುರುಕುಲ ಎರಡನೇ ಮನೆಯಾಗಿದ್ದರಿಂದ ಅವರೇ ಅಪ್ಪ-ಅಮ್ಮ, ಬಂಧು-ಬಳಗ ಎಲ್ಲವೂ ಆಗಿದ್ದರು. ಐದುನೂರರಷ್ಟು ಹದಿಹರೆಯದ ಹುಡುಗರ ತಂಟೆ-ತಕರಾರು, ಅವಿವೇಕತನ, ಸುಖ-ದುಃಖ, ಕಾಯಿಲೆ-ಕಸಾಲೆ ಎಲ್ಲವನ್ನೂ ಸಹಿಸಿಕೊಳ್ಳುವ ಭೂಮಿತಾಯಿ ಅವರಿದ್ದರು. ಹೀಗೆ ಬರೆಯುತ್ತಿದ್ದರೆ ಯಾಕೋ ಮನಸ್ಸೆಲ್ಲ ಆರ್ದ್ರವಾಗಿ ಕಣ್ಣಂಚು ಒ
ದ್ದೆಯಾಗುತ್ತಿದೆ.

ಸಿದ್ಧವನ ಗುರುಕುಲವನ್ನೇ ತಮ್ಮ ಮನೆಯಾಗಿ ಹೊಂದಿ ಉಜಿರೆಯ ಕಾಲೇಜಿನಲ್ಲಿ ಪದವಿ ಪಡೆದ ನನ್ನಂತಹ ಸಾವಿರಾರು ಮಂದಿಗೆ ಗುರುಕುಲದೊಂದಿಗೆ ಇಂತಹದೊಂದು ಅಖಂಡ ಮೈತ್ರಿ ಇದೆ. ಸಾವಿರಾರು ಬಡ ಮಕ್ಕಳ ವಿದ್ಯಾಭ್ಯಾಸದ ಕನಸನ್ನು ನಿಜವಾಗಿಸಿದ ಸಿದ್ಧವನ ಗುರುಕುಲಕ್ಕೀಗ 75ರ ಸಂಭ್ರಮ.  ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ| ಮಂಜಯ್ಯ ಹೆಗ್ಗಡೆಯವರು 1940ರಲ್ಲಿ ಬಿತ್ತಿದ ಬೀಜವಿದು. ದೂರದ ಬಂಗಾಲದಲ್ಲಿ ಗುರುದೇವ ರವೀಂದ್ರನಾಥ ಠ್ಯಾಗೋರರು ‘ವಿಶ್ವಭಾರತಿ’ಯ ಕನಸು ಕಂಡಿದ್ದರೆ, ಮಂಜಯ್ಯ ಹೆಗ್ಗಡೆಯವರು ಸಿದ್ಧವನ ಗುರುಕುಲದ ಕನಸು ಕಂಡರು. ‘ವಿದ್ಯೆಯೆಂದರೆ ಹೊರಗಿನಿಂದ ಹೊತ್ತಿಸಬಲ್ಲ ಮತ್ತು ಸರಿಪಡಿಸಬಲ್ಲ ಲಾಟೀನಿನ ಬೆಳಕಲ್ಲ; ಸ್ವಯಂಪ್ರಭೆ ಬೀರುವ ಮಿಂಚುಹುಳ’ ಎಂದಿದ್ದರು ಠ್ಯಾಗೋರರು. ಅಂತಹದೇ ಒಂದು ದರ್ಶನ ಹೆಗ್ಗಡೆಯವರ ಮನಸ್ಸಿನಲ್ಲಿದ್ದಿರಬೇಕು. ಅದಕ್ಕೇ ಸಿದ್ಧವನ ಕೇವಲ ಹಾಸ್ಟೆಲ್ ಆಗಲಿಲ್ಲ. ಜೀವನ ಶಿಕ್ಷಣವನ್ನು ನೀಡುವ ಗುರುಕುಲ ಆಯಿತು. ಆಧುನಿಕ ಬದುಕಿಗೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೆ ಪ್ರಚೋದನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಗಳ ಮಹೋನ್ನತಿಯನ್ನು ತಿಳಿಸಿಕೊಡುವಂತಹ ಆಧ್ಯಾತ್ಮಿಕ ಶಿಕ್ಷಣದ ಕೇಂದ್ರವಾಗಿ ಅದು ಬೆಳೆಯಿತು.

ಮಂಜಯ್ಯ ಹೆಗ್ಗಡೆಯವರು ಬಿತ್ತಿದ ಬೀಜವನ್ನು ಬೆಳೆಸಿ ಹೆಮ್ಮರವಾಗಿಸುವಲ್ಲಿ ಅವರ ನಂತರ ಬಂದ ದಿ| ರತ್ನವರ್ಮ ಹೆಗ್ಗಡೆ, ಈಗಿನ ಧರ್ಮಾಧಿಕಾರಿಯಾಗಿ ಹಳ್ಳಿಗಳಲ್ಲಿ ಅಭಿವೃದ್ಧಿಯ ಹೊಸ ಪರಂಪರೆ ಹುಟ್ಟುಹಾಕಿದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ತುಂಬ ದೊಡ್ಡದು. ಸಿದ್ಧವನ ಗುರುಕುಲವೆಂದರೆ ಇವರೆಲ್ಲರಿಗೂ ತಮ್ಮ ಉಳಿದ ನೂರಾರು ಶಿಕ್ಷಣ ಸಂಸ್ಥೆಗಳಿಗಿಂತ ಒಂದು ಹಿಡಿ ಪ್ರೀತಿ ಜಾಸ್ತಿ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಓಡಾಡುವಾಗ ಒಂದಿಷ್ಟು ಬಿಡುವು ದೊರೆತರೂ ಗುರುಕುಲಕ್ಕೆ ಭೇಟಿ ನೀಡಿ ಮಕ್ಕಳ ಕ್ಷೇಮಸಮಾಚಾರ ವಿಚಾರಿಸದೆ ಇರರು. ನಾವು ಗುರುಕುಲದಲ್ಲಿದ್ದಾಗಲಂತೂ ವೀರೇಂದ್ರ ಹೆಗ್ಗಡೆಯವರ ತಾಯಿ ದಿ| ರತ್ಮಮ್ಮ ಹೆಗ್ಗಡೆಯವರು, ಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮುಂತಾದವರು ಆಗಾಗ್ಗೆ ಗುರುಕುಲಕ್ಕೆ ಬಂದು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಎದುರಿಗೆ ಸಿಕ್ಕ ಒಬ್ಬೊಬ್ಬರನ್ನೂ ಹತ್ತಿರ ಕರೆದು ‘ಊಟ-ತಿಂಡಿ ಚೆನ್ನಾಗಿದೆಯಾ? ತೋಟದ ಕೆಲಸ, ಹಸುಕರುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಾ? ಮನೆಯ ನೆನಪಾಗುತ್ತಾ?’ ಎಂದು ಬೆನ್ನು ನೇವರಿಸಿ ಕೇಳಿದರೇ ಅವರಿಗೆ ಸಮಾಧಾನ. ಇವೆಲ್ಲಕ್ಕೂ ಸರಿಸಮನಾಗಿ ಗುರುಕುಲಕ್ಕಾಗಿ ತಮ್ಮ ಬದುಕು ತೇದವರು ಅದರ ವಾರ್ಡನ್‍ಗಳು. ಪಂಡಿತ ಜಿನರಾಜ ಶಾಸ್ತ್ರಿಯಾದಿಯಾಗಿ ಹಲವು ಮಂದಿ ಹಾಕಿಕೊಟ್ಟ ಈ ಪರಂಪರೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಿರುವವರು ನಾನು ಆಗಲೇ ಹೇಳಿದ ಮಹಾಬಲೇಶ್ವರ ಭಟ್ಟರು.

ಸಿದ್ಧವನವನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅದರಲ್ಲೊಂದು ಮಿನಿ ಭಾರತದ ಬಿಂಬ ಕಂಡೀತು. ಭಾರತದ ವೈವಿಧ್ಯತೆ, ಅದರೊಳಗಿನ ಏಕತೆ, ಸರಳ ಜೀವನ, ಸಹಬಾಳ್ವೆ-ಸಮನ್ವಯತೆಗಳೆಲ್ಲ ಸಿದ್ಧವನ ಗುರುಕುಲದೊಳಗೆ ಅಂತರ್ಗತವಾಗಿವೆ. ಅಲ್ಲಿ ಜಾತಿ-ಮತ-ಪಂಥಗಳ ಪ್ರತ್ಯೇಕತೆಯಿಲ್ಲ. ಬಡವ-ಶ್ರೀಮಂತ ಬೇಧವಿಲ್ಲ. ಸಿದ್ಧವನದೊಳಗೆ ಕಾಲಿಟ್ಟ ಮೇಲೆ ಎಲ್ಲರೂ ಅಲ್ಲಿನ ಶ್ವೇತ ಸಮವಸ್ತ್ರದ ಒಳಗೆ ಸರ್ವಸಮಾನರು. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್-ಜೈನ ಇತ್ಯಾದಿ ಎಲ್ಲ ಮತ-ಪಂಥದವರಿಗೂ ಅಲ್ಲಿ ಪ್ರವೇಶವಿದೆ. ವಿದ್ಯಾರ್ಥಿಯ ಬಡ ಆರ್ಥಿಕ ಹಿನ್ನೆಲೆ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲಿನ ಪ್ರವೇಶಾತಿಯ ಮಾನದಂಡ.

ಸಿದ್ಧವನದಲ್ಲಿ ಎರಡೋ ಮೂರೋ ವರ್ಷ ಕಳೆದ ವಿದ್ಯಾರ್ಥಿ ಪ್ರಪಂಚದ ಯಾವ ಭಾಗದಲ್ಲೂ ಬದುಕಿ ಬರಬಲ್ಲ ಎಂಬುದು ಅಲ್ಲಿ ಬೆಳೆದವರ ನಡುವಿನ ಹೆಮ್ಮೆಯ ನುಡಿ. ಬರೀ ಬದುಕಿ ಬರುವುದಲ್ಲ, ಸಿದ್ಧವನದ ತೋಟದಲ್ಲಿ ಚಿಗಿತ ಸಾವಿರಾರು ಮೊಗ್ಗುಗಳು ಇಂದು ಪ್ರಪಂಚದ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಅರಳಿ ಸುವಾಸನೆ ಬೀರುತ್ತಿವೆ. ಅವರ ಯಶಸ್ಸಿನ ಹಿಂದೆ ಸಿದ್ಧವನದಲ್ಲಿ ಕಲಿತ ಜೀವನದ ಪಾಠಗಳಿವೆ. ಅಲ್ಲಿ ಅವರಿಗೆ ತೊಡಿಸಲಾಗುವ ಶಿಸ್ತು-ಸಂಸ್ಕಾರದ ಚೌಕಟ್ಟು ಬದುಕಿನುದ್ದಕ್ಕೂ ಅವರನ್ನು ಕಾಪಾಡುತ್ತದೆ. ಅವರೆಲ್ಲ ‘ಊಟಕೆ ಹಾಜರ್’ ಸಂಸ್ಕೃತಿಯವವರಲ್ಲ. ಒಂದೊಂದು ತುತ್ತಿನ ಹಿಂದಿನ ಬೆವರಿನ ಬೆಲೆಯನ್ನು ಅರಿತವರು.

‘ಹಡಗನ್ನು ತುಂಬಿಸಲು ಹೋದವ ಹಿಂದೆ ಬಂದ, ಹೊಟ್ಟೆ ತುಂಬಿಸಲು ಹೋದವ ಹಿಂದೆ ಬರಲಿಲ್ಲ’ ಎನ್ನುತ್ತಿದ್ದರು ಮಹಾಬಲೇಶ್ವರ ಭಟ್ಟರು. ಸ್ಪರ್ಧೆಯ ಈ ಪ್ರಪಂಚದಲ್ಲಿ ಹೊಟ್ಟೆಯೆಂಬ ಹಡಗು ತುಂಬಿಸುವ ಕೆಲಸ ಎಷ್ಟು ಕಷ್ಟದ್ದು ಎಂಬುದನ್ನು ಅವರು ಪ್ರತಿದಿನ ನೆನಪಿಸುತ್ತಿದ್ದರು. ತೆಂಗಿನ ತೋಟದ ಕಳೆ ತೆಗೆಸುತ್ತಲೇ, ತರಕಾರಿ ಸಾಲು ಹಸನುಗೊಳಿಸುತ್ತಲೇ ಮನಸ್ಸು-ದೇಹಗಳನ್ನು ಹಸನುಗೊಳಿಸಲು ಕಲಿಸುವ ಅಸದೃಶ ಕಲೆಯೊಂದು ಅವರಿಗೆ ಕರಗತವಾಗಿತ್ತು. ಆ ಶಕ್ತಿ ಅವರ ಮಾತುಗಳಿಗೆ ಇತ್ತು. ಬೆಳಗ್ಗೆ ಐದು ಗಂಟೆಗೆ ಎದ್ದರೆ ತಣ್ಣೀರಿನ ಸ್ನಾನ, ಮತ್ತೆ ಅರ್ಧ ಗಂಟೆ ಪ್ರಾರ್ಥನೆ, ವಿಚಾರ ಮಂಥನ. ಆ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಮಾತು ಕಾಲೇಜಿನಲ್ಲಿ ನಡೆಯುವ ಇಡೀ ದಿನದ ಪಾಠ-ಪ್ರವಚನಗಳಿಗೆ ಶ್ರೇಷ್ಠ ಮುನ್ನುಡಿಯಂತೆ ಇರುತ್ತಿತ್ತು. ಸಂಜೆ ಮತ್ತೆ ನಡೆಯುತ್ತಿದ್ದ ಚಿಂತನಾ ಸಭೆಯಂತೂ ಪಠ್ಯ ಪುಸ್ತಕಗಳಾಚೆಯ ಕಲಿಕೆಯ ವೇದಿಕೆಯಾಗಿತ್ತು. ಅಲ್ಲಿ ಹೊಮ್ಮುತ್ತಿದ್ದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗಗಳ ಸಾರ ಬದುಕಿನ ಗಾಂಭೀರ್ಯತೆಗೆ ಕೈದೀವಿಗೆಯಾಗಿತ್ತು.

ಸಿದ್ಧವನವೀಗ ಪ್ರಸಿದ್ಧವನವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಂಡಿದೆ. ಮೊದಲು ಏಳೆಂಟು ಪ್ರತ್ಯೇಕ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ ಇತ್ತು. ಈಗ ಒಂದೇ ಸುಸಜ್ಜಿತ ಕಟ್ಟಡವಿದೆ. ಸಾಕಷ್ಟು ಸೌಲಭ್ಯಗಳಿವೆ. ಬೆಳಗ್ಗೆ ಗಂಜಿ ಊಟದ ಬದಲು ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆಯಿದೆ. ಇವೆಲ್ಲ ಭೌತಿಕ ಬದಲಾವಣೆಗಳು ಮಾತ್ರ. ಸಿದ್ಧವನದ ಹಿಂದಿನ ದರ್ಶನ, ಮೌಲ್ಯಗಳ ಅಂತರ್ಯ ಇನ್ನೂ ಸಾವಿರ ವರ್ಷ ಕಳೆದರೂ ಬದಲಾಗದು, ಬದಲಾಗಬಾರದು. ಏಕೆಂದರೆ ಅದೊಂದು ಪುಟ್ಟ ಭಾರತ.